ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ನಟನ್ಯಾರು ಎಂದು ಪ್ರಶ್ನೆ ಎಸೆದು ಬಿಟ್ಟರೆ ಥಟ್ ಅಂತಾ ಅವರ ಬಾಯಿಯಿಂದ ಉದುರುವ ನಟ ಗುರುನಂದನ್. ಕಾರಣ ಇಷ್ಟೇ ಗುರುನಂದನ್ ಕಾಣಿಸಿಕೊಂಡ ಫಸ್ಟ್ ರ್ಯಾಂಕ್ ರಾಜು ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬರೋಬರಿ ೫೦ ದಿನಗಳನ್ನು ತುಂಬಿಕೊಂಡು ಮತ್ತಷ್ಟೂ ಹೌಸ್ಫುಲ್ ಪ್ರದರ್ಶನ ಕಾಣುತ್ತಾ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಮತ್ತೊಂದೆಡೆ ಮೊದಲಿನ ಸಿನಿಮಾ ಟೀಮ್ ಜತೆಯಲ್ಲಿ ಮತ್ತೊಂದು ಸಿನಿಮಾ ಮಾಡಲು ಗುರುನಂದನ್ಗೆ ಹೊಸ ಆಫರ್ ಬಂದಿದೆ.
ಈ ಹೊಸ ಚಿತ್ರದ ಕುರಿತಾದ ಡಿಟೇಲ್ಸ್ಗಳನ್ನು ಎಲ್ಲಿಯೂ ಬಾಯಿಬಿಡದ ನಟ ಗುರುನಂದನ್ ತಮ್ಮ ಹೊಸ ಚಿತ್ರದಲ್ಲಿ ಮೊದಲಿನ ಸಿನಿಮಾ ತಂಡದ ಬಹುತೇಕ ಮಂದಿ ಇದ್ದಾರೆ ಎನ್ನುವ ಸತ್ಯಾಂಶವನ್ನು ಹೇಳಿಕೊಂಡಿದ್ದಾರೆ. ಮುಖ್ಯವಾಗಿ ನರೇಶ್ ಕಮಾರ್ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ನಿರ್ಮಾಪಕರಾಗಿ ಮಂಜುನಾಥ್ ಕಾಣಿಸಿಕೊಂಡಿದ್ದಾರೆ.