ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ತುಳು ಸಿನಿಮಾರಂಗಕ್ಕೆ ಗುಡ್ಬಾಯ್ ಹೇಳಿದ್ದಾರೆ. ಇದು ಪಕ್ಕಾ ಶಾಕಿಂಗ್ ನ್ಯೂಸ್. ಕಾರಣ ಇಷ್ಟೇ ತುಳುವಿನ ಪ್ರತಿಭಾವಂತ ಸಿನಿಮಾ ನಿರ್ದೇಶಕ ವಿಜಯ್ ಕುಮಾರ್ ಯಾಕೆ ತುಳು ಸಿನಿಮಾ ಅಂಗಳವನ್ನು ಬಿಟ್ಟು ಹೋದರು ಎನ್ನುವುದಕ್ಕೆ ಸಧ್ಯಕ್ಕೆ ಕಾರಣವಂತೂ ಕೊಟ್ಟಿಲ್ಲ.
ಒಂದು ವರ್ಷದ ಕಾಲ ತುಳುವಿನಲ್ಲಿ ಯಾವುದೇ ಸಿನಿಮಾ ಮಾಡೋದಿಲ್ಲ ಎನ್ನುವ ಗ್ಯಾರಂಟಿ ಮಾತನ್ನು ಹೇಳಿದ್ದಾರೆ. ಈಗಾಗಲೇ ತುಳುವಿನಲ್ಲಿ ಓಡಿದ ಮದಿಮೆ( ಮದುವೆ) ಸಿನಿಮಾವನ್ನು ಗುಜರಾತಿ, ಮರಾಠಿ ಭಾಷೆಯಲ್ಲಿ ತರುವ ಕೆಲಸ ಮಾಡುತ್ತಿದ್ದಾರೆ. ಈ ಬಳಿಕ ಮಲಯಾಳಂಗೂ ಪ್ರಯಾಣ ಬೆಳೆಸುವ ಸೂಚನೆ ನೀಡಿದ್ದಾರೆ. ಟೋಟಲಿ ತುಳು ಸಿನಿಮಾ ಅಂಗಳಕ್ಕೂ ಬಿಗ್ ನಷ್ಟವಾಗುವ ಸಂಭವ ಜಾಸ್ತಿ ಇದೆ.