ಸಿಟಿ ಸುದ್ದಿ

ಮತ್ತೆ ಸಚಿವ ಅಭಯಚಂದ್ರ ಜೈನ್ ರಾಂಗ್ ರೂಟ್!

ಮೂಡುಬಿದರೆಯ ಶಿರ್ತಾಡಿ ಜಿ.ಪಂ ವ್ಯಾಪ್ತಿಯ-ಬೋರುಗುಡ್ಡೆ ಶಾಲೆಯ ಮತಗಟ್ಟೆ ಬಳಿ ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ ನಡುವೆ ಮಾತಿನ ಚಕಾಮಕಿ ನಡೆದಿದೆ.

ಈ ಮತಗಟ್ಟೆಯ ಬಳಿ ಜಗದೀಶ್ ಅಧಿಕಾರಿ ಮತ್ತು ಅಭಯಚಂದ್ರ ಜೈನ್ ಮುಖಾಮುಖಿಯಾದರು. ಈ ವೇಳೆ ಇಬ್ಬರ ನಡುವೆ ಕ್ಷುಲ್ಲುಕ ಕಾರಣಕ್ಕೆ ವಾಕ್ ಸಮರ ನಡೆಯಿತು. ಕೆಲಸವಿಲ್ಲದಿದ್ದರೆ ಮನೆಯಲ್ಲೇ ಕುಳಿತುಕೊಳ್ಳಿ ಎಂದು ಅಭಯಚಂದ್ರ ಜೈನ್ ಹೇಳಿದರೆ, ಮನೆಯಲ್ಲಿ ನಿಮ್ಮನ್ನು ಕೂತುಕೊಳಿಸಲು ಗೊತ್ತುಂಟು ಎಂದು ಅಧಿಕಾರಿ ಸವಾಲು ಹಾಕಿದರು. ತುಳುವಿನಲ್ಲಿ ನಡೆದ ಈ ವಾಕ್ ಸಮರ ಅಲ್ಲಿದ್ದ ಕಾಂಗ್ರೆಸ್ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪುಕ್ಕಟೆ ರಂಜನೆ ನೀಡಿತು.