ತಮಿಳುನಾಡಿನ ಧರ್ಮಪುರಿ ಮೂಲದ ಉದ್ಯಮಿಯಾಗಿರುವ ಜನಾರ್ಧನ್, ತಮ್ಮ ಹಾಗೂ ಮೇಘನಾ ಮದುವೆಗೆ ಸಂಬಂಧಪಟ್ಟ ದಾಖಲೆಗಳನ್ನು ಮೇಘನಾ ರಾಜ್ ಕದ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ಎರಡು ಬಾರಿ ಜನಾರ್ಧನ್ ದೂರು ನೀಡಿದ್ದಾರೆ. ಈ ದೂರನ್ನು ಪೊಲೀಸ್ ಆಯುಕ್ತರು ಜೆ.ಪಿ. ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೆ ದೂರುದಾರನ ಹುಡುಕಾಟ ನಡೆಸಿದ್ದಾರೆ.
ಆದರೆ ವಂಚನೆ ಆರೋಪವನ್ನು ನಟಿ ಮೇಘನಾ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಪೊಲೀಸರೆದುರು ಮೇಘನಾ ಹೇಳಿಕೊಂಡಿದ್ದಾರೆ.